ಪಾವಗಡ ಈ ಬರಿಯ ಬೃಹತ್ ಲೋಕ್ ಆದಾಲತ್ ಕಾರ್ಯಕ್ರಮ ದಲ್ಲಿ 1595 ಪ್ರಕರಣಗಳಲ್ಲಿ 1457 ಪ್ರಕರಣಗಳ ಪೈಕೆ 51.22706 ಲಕ್ಷ ಹಣದಷ್ಟು ಇತ್ಯರ್ಥ ಪಡಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯದೀಶೆ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಎಂ.ಎಸ್. ಹರಿಣಿ ತಿಳಿಸಿದರು.
ಪಾವಗಡ ದಿನಾಂಕ 12.03.2022 ರಂದು ಪಾವಗಡ ನ್ಯಾಯಾಲಯದಲ್ಲಿ ಅವರಣದಲ್ಲಿ ಬೃಹತ್ ಲೋಕ ಅದಾಲತ್ ನಡೆದಿದ್ದು ಕಕ್ಷಿದಾರರಿಗೆ ಸೂಕ್ತ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಸೂಕ್ತವಾದ ಅವಕಾಶ ಲೋಕ ಅದಾಲತ್ ನಲ್ಲಿ ಇತ್ಯರ್ಥವಾದ ಪ್ರಕರಣಗಳು ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು ಬೃಹತ್ ಅದಾಲತ್ ನಲ್ಲಿ ಸುಮಾರು 1595 ಪ್ರಕರಣಗಳಲ್ಲಿ 1457 ಪ್ರಕರಣಗಳು ಹಾಗೂ 51.22.706 ಲಕ್ಷ ದಷ್ಟು ಹಣ ಇತ್ಯರ್ಥ ಗೊಳಿಸಲಾಯಿತ್ತು. ತಾಲೂಕಿನ ಜನತೆ ಇಂತಹ ಸದಾವಕಾಶ ಇದನ್ನು ಎಲ್ಲಾ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಲಾಯಿತು.
ಈ ವೇಳೆ ಜಗದೀಶ್ ಬಿಸೇರೊಟ್ಟಿಯವರು ಕಾರ್ಯದರ್ಶಿಗಳು ತಾಲ್ಲೂಕು ಕಾನೂನು ಸೇವ ಸಮಿತಿಯ ಹಾಗೂ ಸಿವಿಲ್ ನ್ಯಾಯದೀಶರು ಮತ್ತು ಶ್ರೀ ಮತಿ ಅಖಿಲಾ ಹೆಚ್.ಕೆ.ಅಧಿಕ ಸಿವಿಲ್ ನ್ಯಾಯದೀಶೆ ಪಾವಗಡ.ಸಹಾಯಕ ಸರ್ಕಾರಿ ಅಭಿಯೋಜಕರಾದ ವಿ.ಮಂಜುನಾಥ.ಸಣ್ಣಿರಪ್ಪ ಜಿ.ಹೆಚ್

ಅಂಜನೇಯ ಅಧ್ಯಕ್ಷರು ವಕೀಲರ ಸಂಘ ಪಾವಗಡ..ಕಾರ್ಯದರ್ಶಿ ರಾಮಾಂಜಿನೇಯಲು.
ಹಿರಿಯ ವಕೀಲರಾದ ನಾಗೇಂದ್ರಪ್ಪ.ಉಗ್ರ ಮೂರ್ತಿ.ಯಜ್ನಾನಾರಾಯಣ ಶರ್ಮ.ರಮೇಶ್.ಮಲ್ಲಿಕಾರ್ಜುನ. ಇತರೆ ಹಲವು ಮಂದಿ ವಕೀಲರು ಹಾಗೂ ನ್ಯಾಯಾಲಯದ ಸಿಬ್ಬಂದಿ ಮತ್ತು ಕಕ್ಷಿದಾರರು ಈ ಬೃಹತ್ ಲೋಕ್ ಆದಾಲತ್ ನಲ್ಲಿ ಭಾಗವಹಿಸಿದ್ದರು.
ವರದಿ:-ಇಮ್ರಾನ್ ಉಲ್ಲಾ.ಪಾವಗಡ






